ಸೋಮವಾರ, ಏಪ್ರಿಲ್ 20, 2020

Corona...

ಸುಮಾರು ವರ್ಷದ ನಂತರ account activate ಮಾಡಿದ್ದೇನೆ ... ಬರವಣಿಗೆ ಕೂಡ .
ನಂಜನಗೂಡಿಗೆ ಮಾರ್ಚ್ ೧೧ ರಂದು ಬೆಂಗಳೂರಿನಿಂದ ಬಂದೆ , ಲೊಕ್ಡೌನ್ ನಮಗೆಲ್ಲ ಒಂದಿಷ್ಟು  ದಿನ ಮುಂದಾಗೇ ಶುರುವಾಯಿತು , Corona ದ ತೀವ್ರತೆಯ  ಬಗ್ಗೆ ಆಗಲೇ ಒಂದಿಷ್ಟು ಭಯ ,ಆತಂಕ ,ಎಲ್ಲ ಇದ್ದಿದರ ಕಾರಣ ಅಪ್ಪ ಅಮ್ಮನ ಒಟ್ಟಿಗೆ ಇರಲು ಊರು ಸೇರಿದಾಗ ಸಮಾಧಾನ .
ನಮ್ಮೂರು , ನಮ್ಮ ಮನೆ , ಎಲ್ಲ ಆಪ್ತ ,ಆತ್ಮೀಯ , ನನ್ನೂರಿನ ರಸ್ತೆ , ಬೀದಿ , ದೇವಸ್ಥಾನ ,ನದಿ ತೀರದ ಮೆಟ್ಟಿಲು;ಕೆಲವೊಮ್ಮೆ ಎಲ್ಲ ಹುಡುಕಾಟ ,ಹೋರಾಟಕ್ಕೂ  , ಇಲ್ಲೇ ಅಂತ್ಯದ  ನಿಟ್ಟುಸಿರು , ಎಲ್ಲ ಮೀರಿದ ಸಾಂತ್ವನ .
ಇಡೀ ಭಾರತದದ ಉದ್ದಗಲಕ್ಕೂ ತಿರುಗಿದರು ನನ್ನೂರಿನ ಮತ್ತು ನನ್ನಬಾಂಧವ್ಯಕ್ಕೆ  ಸಮನಾದ ಭಾವ ಎಲ್ಲೂ  ಇಲ್ಲ  .
ಬೇರೆ ದೇಶಕ್ಕೆ ಶಾಶ್ವತವಾಗಿ ಹೋಗುವ ಅವಾಕಾಶ ಬಂದಾಗ ಕೂಡ  ನನ್ನೂರಿಗೆ ಬೇಕೆಂದಾಗ ನಾನು ಬರಲಾರದೆ ಹೋಗಬಹುದು ಎಂಬ ಪರಿಕಲ್ಪನೆಗೆ ಉತ್ತರಿಸಲಾರದೆ, ವೃತ್ತಿ ಬದುಕಿನ ಒಂದು ಪ್ರಮುಖ ನಿರ್ಧಾರ ಮಾಡಿದೆ, ನನಗೆ ನನ್ನ ಕಡೆ ಉಸಿರಿರುವವರೆಗೂ ಈ ವಿಚಾರವಾಗಿ ಕಿಂಚಿತ್ತೂ ಬೇಸರವಾಗಲಾರದು .
ಎಲ್ಲರಿಗು ತಮ್ಮ ತಮ್ಮ ಊರಿನ ಬಗ್ಗೆ ಪ್ರೀತಿ ಸಾಮಾನ್ಯ , ನನ್ನದು ಹಾಗೆ , ನನ್ನೂರು ತಾಯಿಯಂತೆ.

ನಂಜನಗೂಡು ಮೈಸೂರಿನ ಬೆಂಗಳೂರಿನ ಹಾಗೆ , ನಂಜುಡೇಶ್ವನ ದಿವ್ಯ ಕ್ಷೇತ್ರ , ಕಬಿನಿಯ ದೆಸಿಯಿಂದ ಕಾರ್ಖಾನೆಗಳ ತವರು , ದೇಶದ ಎಲ್ಲ ಭಾಗದ ಜನ ಇಲ್ಲಿ ನಿಮಗೆ ಕಾಣ ಸಿಗುತ್ತಾರೆ , ರಾಜ್ಯದ ಎಲ್ಲ ಭಾಗದ ಜನ ದೈವ ದರ್ಶನಕ್ಕೆ ವರ್ಷಪೂರ್ತಿ ಬರುತ್ತಾರೆ . ಈ ಊರು ಎಲ್ಲರನ್ನು ಅಪ್ಪಿಕೊಂಡು ಅವರಿಗೆ ಬದುಕು ಕಟ್ಟಿಕೊಳ್ಳಲು ಆಸರೆಯಾಗಿದೆ , ಮಾನವನ ಕೈ ಮೀರಿದ ಸಂಘರ್ಷಕ್ಕೆ ನಂಜುಡ , ಅವನ ದರ್ಶನಕ್ಕೆ ಇಂಡು , ಇಂಡು, ಭಕ್ತರು  . ಈಗೆ Cosmopoliton ಸಂಸ್ಕೃತಿ ನಮ್ಮದು  .

ಈಗ ವಿಷಯಕ್ಕೆ ಬರೋಣ ,  ಮೊದಲ ದಿನ Coronaದ ಕೇಸ್ ನಮೂರಲ್ಲಿ ವರದಿಯಾದಾಗ ಸುದ್ದಿ ಜೀರ್ಣಿಸಿಕೊಳ್ಳಲು ಕಷ್ಟವಾಯಿತು , ಸುದ್ದಿ ಬಿತ್ತಿಸಿದ channel ಗಳು , ನಿರೂಪಕರು , ಅವರ ನಾಟಕೀಯ , ಬೀಭತ್ಸ ರೀತಿಯ ಬಣ್ಣನೆ , ಅಲ್ಲಿಗೆ ಒಂದು ಊರಿಗೆ ,  ಆ ಊರಿನ ಜನಕ್ಕೆ ಶಾಶ್ವತ ಎನ್ನುವಷ್ಟು ಅಸ್ಪರ್ಶ್ಯ ಭಾವಕ್ಕೆ ನಾಂದಿಯಾಯಿತು ,
ಬೆಳಗೆ , ಸಂಜೆ , ಮಧ್ಯಾಹ್ನ ನಮೂರಿನದೇ ಸುದ್ದಿ , ಎಂದು ಕಾಲ್ ಮಾಡದ ಹಳೆಯ ಸ್ನೇಹಿತರು , ಪರಿಚಿತರು ಫೋನ್ ಮಾಡಿ , ಕಳವಳ ವ್ಯಕ್ತಪಡಿಸಿದ್ದು ಶುರು ಅಷ್ಟೇ , ನಂಜನಗೂಡಿನ ನಂಜು , corono ಫ್ಯಾಕ್ಟರಿ , ಉಪಮಾನ , ಉಪಮೇಯ , ಒಬ್ಬರಿಗಿಂತ ಒಬ್ಬರ ಕ್ರಿಯಾಶೀಲತೆ.
ಮನೆಯಲ್ಲಿ ಕೂತು ಟಿವಿ ನೋಡುವ ಅಪ್ಪ ,ಅಮ್ಮ ನಿಂದ ಇಡಿದು ಕಾಳಜಿಯಿರುವ ಪ್ರತಿಯೊಬ್ಬರಲ್ಲೂ ಮೂಡಿಸಿರುವ ಕಳವಳ ,ಆತಂಕ ನಾನು ಇಲ್ಲಿ ಹೇಳಿದಷ್ಟು ಕಮ್ಮಿ .
ಅದರ  ಮೇಲೆ  ಕಿವಿಗೆ ಬೀಳುವ ಸುದ್ದಿ , ನಮ್ಮೊರಿನ ಪಕ್ಕದ ಹಳ್ಳಿಗಳ ಜನ ನಮೂರಿನ ಜನ ರಸ್ತೆಯ ಮೇಲೆ ಹಾದು ಹೋಗಬಹುದೆಂದು ದೊಡ್ಡ ಹಳ್ಳ ತೆಗೆದು , ರಸ್ತೆಗೆ ಮರದೆತ್ತರ ಮಣ್ಣು ಸುರಿದು , ನಮ್ಮನು ಪ್ರತ್ಯೇಕಿಸಿದ್ದಾರೆ ಎಂದು ಯಾರೋ ಹೇಳಿದಾಗ , ಸರಿ ಎನಿಸಿದರೂ , ನಮೂರಿನ ಆ ಕಾರ್ಖಾನೆಯಾ ನೌಕರರು ಬರಿನಮ್ಮೂರಿಗೆ  ಸೀಮಿತರಿರಲಿಲ್ಲವೆಂದು ಗೊತ್ತಿದಕಾರಣಕ್ಕೋ  ಏನೋ ಸಣ್ಣ ಬೇಸರ ಮೂಡುತ್ತಿತ್ತು .

ನಮಗೀಗ ಎಲ್ಲ ಬಹಿಷ್ಕಾರ ಹಾಕಿದ್ದಾರೆ , ಮಾರ್ಚ್ ೨೮ ರಂದು , ಸ್ವಂತ ಚಿಕ್ಕಪನ ಅಂತ್ಯ ಕ್ರಿಯೆಗೆ ಹೋಗಲು ಆಗಲಿಲ್ಲ ನಾವು ನಂಜನಗೂಡಿನವರೆಂದ  ಕಾರಣಕ್ಕೆ ನೀವು ದಯವಿಟ್ಟು ಬರಬೇಡಿ ಎಂದು ಊರಿನವರು ಹೇಳಿದಾಗ ಆದ ಸಂಕಟ , ನನ್ನಪ್ಪನ ಕಣ್ಣಲಿ ಇಂದಿಗೂ ಕಾಣುತ್ತಿರುವ ಆ ನೋವು , ಇದ್ಯಾವುದು ನನಗೆ ಮಾತ್ರ ವಿಶೇಷವಾಗಿ ಸಂಭವಿಸಿದೆ ಎಂದು ನಾನು ಅರ್ಥೈಸುತ್ತಿಲ್ಲ  ,ನನ್ನಂತೆ ನೂರಾರು ಜನ ಇದಕ್ಕಿಂತ ಹೆಚ್ಚಿನ ಸಂದಿಗ್ದತೆಯಲ್ಲಿ ಸಿಲುಕಿದ್ದಾರೆ  ,ಆದರೆ ಒಂದು ಊರಿಗೆ , ಆ ಜನರಿಗೆ ಈ ಪರಿಯ ಬಹಿಷ್ಕಾರ ಹಾಗು ತಿರಸ್ಕಾರ ಮೂಡಿಸುವಂತೆ ಚಿತ್ರಿಸಿರುವ ಮಾಧ್ಯಮಗಳು , ಇಲ್ಲಿನ ಜನ , ಅವರ ಮನಸಿನ್ನ ತಲ್ಲಣ , ಅವರ ಮೇಲೇ  ಮೂಡಿಸಿರುವ ಸಂಶಯ , ಅದನ್ನು  ಅಳಿಸಲುಬೇಕಾಗಬಹುದಾದ  ಹಲವು ತಿಂಗಳು  , ವರುಷಗಳು , ಅವುಗಳ ಬಗ್ಗೆ ಸ್ವಲ್ಪ ಚಿಂತನೆ ಮಾಡಿದರೆ ಸಂವೇದನೆ ಎಂಬ ಪದಕ್ಕೆ ಅರ್ಥ ಬರುತ್ತದೆ .

ನಮ್ಮೊರಿನ  ಜನ , ಈ ದಿನಗಳು ಮುಗಿದ ಮೇಲು ಊರ ಹೆಸರು'ಹೇಳಲು ಮೂರು ಬಾರಿ ಯೋಚಿಸುವಂತ ಸ್ಥಿತಿಯಿದೆ . ನಮೂರಿಗೆ Corona ಬಂದದ್ದು ಕಾಕತಾಳೀಯ , ರೋಗ ಇಲ್ಲಿಂದ ಹೋಗಿ ನಾನವು ಮುಕ್ತರಾಗುವದುನಿಶ್ಚಿತ  , ರೋಗದ ವಿರುದ್ಧ ಹೊರಡುವುದು ನಮ್ಮೆಲರ ಹೊಣೆ, ಹೋರಾಡುವ ದಾರಿಯಲ್ಲಿ ಮನುಷ್ಯ ಸಂಬಂಧಗಳು ನಲುಗದಿರಲಿ  .

ಭಾನುವಾರ, ಆಗಸ್ಟ್ 16, 2015

ಅ........

ಅಪರೂಪದ ಆಲಿಂಗನಗಳ
ಆಹ್ವಾನದ ಆಕಾಂಕ್ಷೆಗೆ
ಅನುದಿನವು
 ಆಕರವೀಯುತ್ತಿದ್ದೇನೆ ..,
ಅಪರೂಪಕ್ಕಾದರು
ಆಗಮನವಾಗಲಿ ,
ಆಕ್ರಂದಿಸುವ ಆತ್ಮ,
ಅಂಗಾತವಾಗುವ ಆಮಿಷಕ್ಕೆ
ಆವಿಯಾಗುವ  ಅಂತರದಲ್ಲಿ
ಅಂಗಾತವಾಗಿದೆ ....,



ಮಂಗಳವಾರ, ಏಪ್ರಿಲ್ 7, 2015

Meet me !

Meet me ,
For one last time ,
How long
 we shall strand
Across the wall ?
Let's
Switch souls ,
For one last time !
what
appears shall
disappear ,
What's heard shall
Mute ,
What floats shall
Settle finally ..
There shall
Be a fusion ,
Soul that sowed
Differences
Shall merge ...
Come let's
switch souls ,
Let love alone
persist
eternally ,
Meet me ,
for one last time

ವಿರಹಿ

ಮಂಜು ಹಾಸಿನ
ಮೇಲೆ ಮಡುಗಟ್ಟಿ
ಕೂತು 
ಬಂದವರ 
ಆರಾಧಿಸುವ
ಮಂದಿ ಇಲ್ಲಿ
ಬನ್ನಿ ..,
ವಿಚಾರದ
ಪರಿಧಿಗೆ
ನಿಲುಕದ
ವಿರಹಿಯೋಬ್ಬನ
ವೈರಾಗ್ಯಕ್ಕು
ಹೊಸದೊಂದು
ಹೆಸರು ತನ್ನಿ ...

ಗುರುತು

ಹೋದವಳ 
ಚಪ್ಪಲಿಯ 
ಹಿಲ್ಡಿನ
ಗುರುತುಗಳು ,
ಜೀವದ 
ಮೇಲೆಲ್ಲ ..

ಸಂಚಾರಿ

ಇರದ
ಕರುಳ ಬಳ್ಳಿಯ
ನಿನ್ನ ಕಂಡಾಗ
ತುಂಡರಿಸಿದೆ ,
ನೀ ಹೋದ ಮೇಲೆ
ಕಾದ ನನಗು ,
ಇರದ ನಿನಗೂ,
ಹರಿವ
ಕಬ್ಬಿಣದಂತ
ಬೆಸುಗೆಯಾ ಅವಿರ್ಭವ frown emoticon
ನೀ ನಡೆಯುವ
ದಾರಿ
ಗೊತ್ತುಮಾಡಿದ ನಾ
ಉಡಾಪೆ ಸಂಚಾರಿ ,
ಒಮ್ಮೆ ನೀ
ಮುಂದಾಗಿದ್ದರೆನಿಸಿ
ಶೀಘ್ರ ಪಥ ಸಂಚಲನ ,
ಮತ್ತೊಮ್ಮೆ
ನೀ
ಹಿಂದಾಗಿದ್ದರೆನ್ನಿಸಿ
ಶೈಶವದ
ತಾಳ್ಮೆ ,
ಈಗೆ ನಡೆದಿದೆ
ಔಪಚಾರಿಕ ಕದಲಿಕೆ ,
ನಿನ್ನ ಗಡಿಯಾರದ
ಮುಳ್ಳುಗಲೊನ್ದಿಗೆ
ಸ್ನೇಹವಿರಬೇಕ್ಕಿತ್ತು ,
ಅವ ನೊಡಿ
ಕದಲುವ ನಿನ್ನ
ಕದಲಿಕೆಯ ಸಾಮ್ಯತೆಗೆ !!
ಗಡ್ಡ ನೆರೆತಿದೆ ,
ಉರಿವ ಸೂರ್ಯ
ನನ್ನ ವಿಸರ್ಜಿಸುವ
ಮುನ್ನ ಉದ್ಭವಿಸು ,
ಈ ದಾರಿಗೆ ನಿನ್ನ
ಹೆಸರಿಟ್ಟು
ಕಳೆದು ಹೋಗುವೆ !!

ಮಾಲಿ

ಕೆಂಪು ಗುಲಾಬಿ
ನಿನ್ನಗೆ ಉಪಮೆ ,
ಕಂಪು ಮಲ್ಲಿಗೆ
ಕೂಡ .,
ಹೂದೋಟದ
ಮಾಲಿಯಗುವರ
ಪಟ್ಟಿಯಲ್ಲಿ
ಕೊನೆಯ ಹೆಸರೊಂದು
ಖಾಲಿ ಬಿಡು .,
ಮೂಡಿವ
ಭಾಗ್ಯವಿಲ್ಲ ,
ಬಿಡಿಸಿ ಮಾಲೆ
ಕಟ್ಟುವ
ಕೈಯಾದರು
ಸಾಕು , ,